ಸ್ಯಾಂಡಲ್ವುಡ್ ‘ಜಿಂಕೆಮರಿ’ ಶ್ವೇತಾ ಮತ್ತೆ ಕಂಬ್ಯಾಕ್..!
ಮಹಿಳಾ ಪ್ರಧಾನ ಚಿತ್ರದಲ್ಲಿ ‘ಬೆನ್ನಿ’ಯಾಗಿ ಬಂದ ನಂದಿತಾ ಶ್ವೇತಾ
ಮತ್ತೆ ಕನ್ನಡದತ್ತ ಬಂದ ‘ನಂದಾ ಲವ್ಸ್ ನಂದಿತಾ’ ನಟಿ ‘ಜಿಂಕೆಮರಿ’ ಶ್ವೇತಾ
‘ಹೊಂದಿಸಿ ಬರೆಯಿರಿ’ ಸಾರಥಿ ರಾಮೇನಹಳ್ಳಿ ಜಗನ್ನಾಥ್ ನಿರ್ಮಾಣದಲ್ಲಿ ನಂದಿತಾ ಶ್ವೇತಾ ಹೊಸ ಸಾಹಸ
‘ಜಿಂಕೆ ಮರೀನಾ.., ಜಿಂಕೆ ಮರೀನಾ…’ ಅಂತಾ ಕುಣಿದು ಫೇಮಸ್ ಆಗಿದ್ದ ನಂದಿತಾ ಶ್ವೇತಾ ಮತ್ತೆ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ‘ನಂದಾ ಲವ್ಸ್ ನಂದಿತಾ’ ಸಿನೆಮಾ ಮೂಲಕ ಕನ್ನಡ ಸಿನಿಪ್ರಿಯರ ಮುಂದೆ ಬಂದಿದ್ದ ಶ್ವೇತಾ, ಆ ಬಳಿಕ ತೆಲುಗು, ತಮಿಳು ಚಿತ್ರರಂಗದತ್ತ ಮುಖ ಮಾಡಿದರು. ಇದೀಗ ಮತ್ತೊಮ್ಮೆ ನಂದಿತಾ ಶ್ವೇತಾ ಸ್ಯಾಂಡಲ್ವುಡ್ಗೆ ಕಂಬ್ಯಾಕ್ ಆಗುತ್ತಿದ್ದಾರೆ.
‘ಪೆಪೆ’ ನಿರ್ದೇಶಕರ ಜೊತೆ ಕೈ ಜೋಡಿಸಿದ ‘ಹೊಂದಿಸಿ ಬರೆಯಿರಿ’ ನಿರ್ದೇಶಕರು…
ನಂದಿತಾ ಶ್ವೇತಾ ಅವರನ್ನು ಮತ್ತೊಮ್ಮೆ ಕನ್ನಡ ಚಿತ್ರರಂಗದತ್ತ ‘ಹೊಂದಿಸಿ ಬರೆಯಿರಿ’ ಸಿನೆಮಾದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಕರೆದುಕೊಂಡು ಬರುತ್ತಿದ್ದಾರೆ. ಹಾಗಂತ ಶ್ವೇತಾಗೆ ಅವರು ಆಕ್ಷನ್-ಕಟ್ ಹೇಳುತ್ತಿಲ್ಲ. ಬದಲಿಗೆ ಅವರಿಗ ಸಿನೆಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ‘ಪೆಪೆ’ ಸಿನೆಮಾ ನಿರ್ದೇಶನ ಮಾಡಿದ್ದ ಶ್ರೀಲೇಶ್ ಎಸ್. ನಾಯರ್ ಈಗ ಮತ್ತೊಂದು ಚಿತ್ರ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ ‘ಜಿಂಕೆಮರಿ’ ಖ್ಯಾತಿಯ ನಂದಿತಾ ಶ್ವೇತಾ ನಾಯಕಿ.
‘ಬೆನ್ನಿ’ ಫಸ್ಟ್ಲುಕ್ಗೆ ಕಿಚ್ಚನ ಖಡಕ್ ಆಗಿ ವಾಯ್ಸ್ 
ಶ್ರೀಲೇಶ್ ‘ಬೆನ್ನಿ’ ಎಂಬ ಮಹಿಳಾ ಪ್ರಧಾನ ಸಿನೆಮಾ ನಿರ್ದೇಶನ ಮುಂದಾಗಿದ್ದಾರೆ. ಈ ಚಿತ್ರದ ಫಸ್ಟ್ ಝಲಕ್ ರಿಲೀಸ್ ಆಗಿದೆ. ನಟಿ ಶ್ವೇತಾ ಇಲ್ಲಿ ‘ಬೆನ್ನಿ’ಯಾಗಿ ಟೈಲಟ್ ರೋಲ್ ಪ್ಲೇ ಮಾಡುತ್ತಿದ್ದಾರೆ. ತಂದೆ ಮತ್ತು ಮಗಳ ಬದುಕಿನಲ್ಲಿ ಎದುರಾಗುವ ಘಟನೆಗಳ ವಿರುದ್ಧ ನಡೆಯುವ ಪ್ರಸ್ತುತ ಕಾಲಘಟ್ಟ ಕಥಾಹಂದರವನ್ನು ‘ಬೆನ್ನಿ’ ಹೊಂದಿದೆ. ಫಸ್ಟ್ ಲುಕ್ ಗೆ ಕಿಚ್ಚ ಖಡಕ್ ಆಗಿ ವಾಯ್ಸ್ ಕೊಟ್ಟಿದ್ದು, ರಕ್ತಸಿಕ್ತ ಅವತಾರದಲ್ಲಿ ನಂದಿತಾ ಶ್ವೇತಾ ಮಿಂಚಿದ್ದಾರೆ.
‘ಬೆನ್ನಿ’ಯಾಗಿ ನಂದಿತಾ ಶ್ವೇತಾ ಎಂಟ್ರಿ 
ದಕ್ಷಿಣದ ಭಾರತದ ಪ್ರಮುಖ ನಟರು ‘ಬೆನ್ನಿ’ಗೆ ಜೊತೆಯಾಗಲಿದ್ದಾರೆ. ಕನ್ನಡ ಮಾತ್ರವಲ್ಲ ತೆಲುಗು, ತಮಿಳು ಹಾಗೂ ಮಲಯಾಳಂ ಈ ಚಿತ್ರ ಮೂಡಿ ಬರುತ್ತಿದೆ. ‘ಸಂಡೇ ಸಿನಿಮಾಸ್’ ಬ್ಯಾನರ್ನಡಿ ರಾಮೇನಹಳ್ಳಿ ಜಗನ್ನಾಥ್ ಚಿತ್ರವನ್ನು ನಿರ್ಮಿಸಿ ಪ್ರೆಸೆಂಟ್ ಮಾಡುತ್ತಿದ್ದಾರೆ. ಸಚಿನ್ ಬಸ್ರೂರ್ ಸಂಗೀತ, ಗುರುಪ್ರಸಾದ್ ನಾರ್ನಾದ್ ಛಾಯಾಗ್ರಹಣ, ಮನು ಶೇಡ್ಗಾರ್ ಹಾಗೂ ರಂಜನ್ ನರಸಿಂಹಮೂರ್ತಿ ಸಂಕಲನ ಸಿನಿಮಾಕ್ಕಿದೆ.















